ಬೆಳೆ ಕೀಟ ನಿರ್ವಹಣೆಯಲ್ಲಿ ಪರಾಗಸ್ಪರ್ಶ ಜೀವಿಗಳ ಸಂರಕ್ಷಣೆ

ಬೆಳೆ ಕೀಟ ನಿರ್ವಹಣೆಯಲ್ಲಿ ಪರಾಗಸ್ಪರ್ಶ ಜೀವಿಗಳ ಸಂರಕ್ಷಣೆ

- ಎಂ. ಮಂಜುನಾಥ, ೯೪೪೮೧೮೩೦೬೮, ಕೀಟಶಾಸ್ತ್ರ ಪ್ರಾಧ್ಯಾಪಕರು (ನಿವೃತ್ತ), ಗೌರಿಕೊಪ್ಪಲು, ಹಾಸನ

ರೈತರು ತಮ್ಮ ಜಮೀನುಗಳಲ್ಲಿ ಗದ್ದೆ ಬೆಳೆಗಳು, ಹಣ್ಣಿನ ಬೆಳೆಗಳು, ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳು, ಹೂವಿನ ಬೆಳೆಗಳು ಹಾಗೂ ಅರಣ್ಯ ಬೆಳೆಗಳನ್ನು ಸಾಮಾನ್ಯವಾಗಿ ಬೆಳೆಯುವರು. ಈ ಎಲ್ಲ ಬೆಳೆಗಳಿಗೆ ಪರಾಗಸ್ಪರ್ಶ ಅತಿ ಮುಖ್ಯವಾಗಿ ಬೇಕಾಗುತ್ತದೆ. ಕೆಲವು ಬೆಳೆಗಳು ಸ್ವಯಂ ಪರಾಗ ಸ್ಪರ್ಶಿಗಳಾದರೆ ಇನ್ನು ಕೆಲವು
ಪರಕೀಯ ಪರಾಗಸ್ಪರ್ಶವನ್ನು ಅವಲಂಬಿಸಿರುತ್ತವೆ. ಪರಾಗ ಸ್ಪರ್ಶ ಬಗೆಗಳಲ್ಲಿ ಗಾಳಿ, ನೀರು ಹಾಗೂ ಇತರೆ ಜೀವಿಗಳಾಗಿರಬಹುದು. ಜೀವಿಗಳಲ್ಲಿ (ಚಿತ್ರ ೧.) ಕೀಟಗಳಾದ ಚಿಟ್ಟೆ, ಪತಂಗಗಳು, ಕಣಜಗಳು, ದುಂಬಿಗಳು, ನೊಣಗಳು, ಜೇನು ಹುಳುಗಳಿವೆ. ಇವೆಲ್ಲವುಗಳಲ್ಲಿ ಜೇನುನೊಣಗಳು ಪ್ರಮುಖ ಸ್ಥಾನ ಹೊಂದಿವೆ. ಜರ್ಮನ್ ದೇಶದ ನೊಬೆಲ್ ಪಶಸ್ತಿ ವಿಜೇತ ಆಲ್ರ‍್ಟ್ ಐನ್‌ಸ್ಟಿನ್ ಉಲ್ಲೇಖದಂತೆ “ಭೂಮಿಯ ಮೇಲೆ ಜೇನುಗಳ ಸಂತತಿ ಸಂಪೂರ್ಣ ನಾಶವಾದಲ್ಲಿ, ಮಾನವನು ನಾಲ್ಕು ವರ್ಷಗಳಿಗಿಂತ ಹೆಚ್ಚು ಬಾಳಲಾರ” ಎಂಬ ಹೇಳಿಕೆ
ಜೇನು ನೊಣಗಳು ಮಾನವನ ಜೀವನದಲ್ಲಿ ಎಷ್ಟು ಮುಖ್ಯ
ಎಂಬುದನ್ನು ಒತ್ತಿ ಹೇಳುತ್ತದೆ.

ಇತರೆ ಪರಾಗಸ್ಪರ್ಶ ಜೀವಿಗಳಲ್ಲಿ ಬಾವಲಿ, ಪಕ್ಷಿ, ಜೇಡ ಮುಂತಾದುವುಗಳಿವೆ. ಪರಕೀಯ ಪರಾಗ ಸ ್ಪರ್ಶ ಕೀಟಗಳಲ್ಲಿ
ಅಂಜೂರದ ಅಗವೋಂಟಿಡ್ ಕಣಜವು ಒಂದು ಶಾಸ್ತಿ çÃಯ ಉದಾಹರಣೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕಣಜಗಳಲ್ಲಿ ಗಂಡು ಕಣಜ ರೆಕ್ಕೆ ರಹಿತ, ಹಾಗೆಯೇ ಹೆಣ್ಣು ಕಣಜದಲ್ಲಿ ರೆಕ್ಕೆ (ಚಿತ್ರ. ೨) ಗಳಿವೆ. ಗಂಡು ಮತ್ತು ಹೆಣ್ಣು ಕಣಜಗಳು ಪರಾಗ ಧೂಳನ್ನು ಉತ್ಪತ್ತಿ ಮಾಡುವ ಕಾಡು ಜಾತಿಯ ಕ್ಯಾಪ್ರಿ ಅಂಜೂರದಲ್ಲಿರುತ್ತವೆ. ಅಲ್ಲೇ ಸಂಯೋಗ ಹೊಂದುವುವು. ಸ್ಮರ‍್ನಾ ಅಂಜೂರವು ಕೇವಲ ಹೆಣ್ಣು ಹೂಗಳನ್ನು ಹೊಂದಿರುತ್ತವೆ. ಹೆಣ್ಣು ಕಣಜ ತನ್ನ ಮೊಟ್ಟಗಳನ್ನಿಡಲು ಹೂಗಳನ್ನು ಹುಡುಕುತ್ತಾ ಸ್ಮರ‍್ನಾ ಅಂಜೂರದ ಹೂಗಳಲ್ಲಿ ಮೊಟ್ಟೆ ಇಡುವ ಪ್ರಯತ್ನದಲ್ಲಿ ಅದು ವಿಫಲವಾಗುತ್ತದೆ, ಏಕೆಂದರೆ ಸ್ಮರ‍್ನಾ ಹೂಗಳಲ್ಲಿ ಅಂಡಾಶಯವು ಆಳದಲ್ಲಿರುವುದು. ಆದರೆ ಸ್ಮರ‍್ನಾ ಹೆಣ್ಣು ಹೂಗಳು ಕ್ಯಾಪ್ರಿ ಹೂವಿನ ಪರಾಗದಿಂದ ಫಲಿತಗೊಳ್ಳುತ್ತವೆ ಅಲ್ಲದೇ ಅಂತಹ ಹೂಗಳು ಸ್ವಾದಭರಿತ ಹಣ್ಣುಗಳನ್ನು ಉತ್ಪಾದಿಸುವುವು. ಆದ್ದರಿಂದ ಕೇವಲ ಪರಾಗ ಸ್ಪರ್ಶಕ್ಕಾಗಿಯೇ ಕ್ಯಾಪ್ರಿ ಅಂಜೂರದ ಗಿಡಗಳನ್ನು ಸ್ಮರ‍್ನಾ ಅಂಜೂರದೊAದಿಗೆ ಬೆಳೆಯುತ್ತಾರೆ.

ನಿಸರ್ಗದಲ್ಲಿ ಪರಾಗಸ ್ಪರ್ಶಿ ಕೀಟಗಳಿರುವಂತೆ ಪೀಡೆ ಕೀಟಗಳೂ ಸಹ ಇರುತ್ತವೆ. ಅವುಗಳಿಂದಾಗುವ ಹಾನಿಯನ್ನು ತಪ್ಪಿಸಲು ಇಂದಿನ ವ್ಯವಸಾಯದಲ್ಲಿ ಅನುಸರಿಸುವ ಕೀಟನಾಶಕಗಳ ಬಳಕೆಯು ಪರಾಗಸ್ಪರ್ಶಿ ಕೀಟಗಳ ನಾಶಕ್ಕೆ ಎಡೆ ಮಾಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಪಯುಕ್ತ ಕೀಟಗಳನ್ನು ರಕ್ಷಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಬೆಳೆ ಕೀಟ ಪೀಡೆಗಳನ್ನು ಹತೋಟಿಯಲ್ಲಿಡಲು ವಿವಿಧ ಹತೋಟಿ ಕಮಗಳನ್ನು ಅನುಸರಿಸಲಾಗುತ ್ತದೆ. ಅವುಗಳಲ್ಲಿ ರಾಸಾಯನಿಕ ವಿಧಾನ ಹೊರತುಪಡಿಸಿ ಉಳಿದೆಲ್ಲ ಹತೋಟಿ ಕ್ರಮಗಳು ಪರಾಗಸ್ಪರ್ಶಿ ಕೀಟಗಳಿಂದ ಸುರಕ್ಷಿತವಾಗಿವೆ. ಪರಕೀಯ ಪರಾಗಸ್ಪರ್ಶಿ ಕೀಟಗಳಲ್ಲಿ ಜೇನು ಹುಳುಗಳು ಅತೀ ಮುಖ್ಯವಾದವುಗಳು. ಇವುಗಳ ಈ ಕ್ರಿಯೆಯಿಂದ ಅನೇಕ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುತ್ತದೆ ಮತ್ತು ಉತ್ಪನ್ನಗಳ ರುಚಿ, ಪೋಷಕಾಂಶಗಳ ಗುಣಮಟ್ಟಗಳು ಹೆಚ್ಚಾಗುತ್ತವೆ. ಸಂಶೋಧನೆಯAತೆ ಜೇನು ನೊಣಗಳು ಭೇಟಿ ನೀಡಿದ ಹತ್ತಿಯಲ್ಲಿ ಶೇ. ೨೩ -೫೩ ರಷ್ಟು
ಹೆಚ್ಚಾಗಿದೆ. ಸೂರ್ಯಕಾಂತಿಯಲ್ಲಿ ಶೇ. ೨೫ – ೩೦ ರಷ್ಟು, ದ್ರಾಕ್ಷಿಯಲ್ಲಿ ಶೇ. ೨೫-೩೦ ರಷ್ಟು, ಕುದುರೆ ಮೆಂತೆಯಲ್ಲಿ ಶೇ. ೩೫-೪೦ ರಷ್ಟು, ಸಾಸಿವೆಯಲ್ಲಿ ಶೇ. ೪೫-೫೦ ರಷ್ಟು, ನಿಂಬೆ, ಸೇಬು ಲವಂಗಗಳಲ್ಲಿ ಶೇ. ೫೦-೬೦ ರಷ್ಟು, ಸೌತೆಯಲ್ಲಿ ಶೇ. ೭೫-೯೦ ರಷ್ಟು, ಕಲ್ಲಂಗಡಿಯಲ್ಲಿ ಶೇ.೯೫-೧೦೦ ರಷ್ಟು ಮತ್ತು ಕುಂಬಳ ಜಾತಿ ಬೆಳೆಗಳಲ್ಲಿ ಶೇ. ೧೦೦-೧೫೦ ರಷ್ಟು ಇಳುವರಿ ಹೆಚ್ಚಾಗಿರುವುದು ಕಂಡುಬAದಿದೆ. ಇದೇ ರೀತಿ ನಿಸರ್ಗದಲ್ಲಿ ಬಹಳಷ್ಟು ಬೆಳೆಗಳು ಕೀಟಗಳ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಹೊಲದ ಬೆಳೆಗಳಲ್ಲಿ ಸೂರ್ಯಕಾಂತಿ, ಹತ್ತಿ, ಹುಚ್ಚೆಳ್ಳು, ಸಾಸಿವೆ, ಅಲಸಂದಿ, ಕಡಲೆ ಮತ್ತು ತೊಗರಿಗಳಿದ್ದರೆ, ತರಕಾರಿ ಬೆಳೆಗಳಲ್ಲಿ ಬದನೆ, ಮೂಲಂಗಿ, ಕ್ಯಾರೆಟ್, ಟೊಮಾಟೊ, ಬೆಂಡೆ, ಸೌತೆ
ಮತ್ತು ಈರುಳ್ಳಿಗಳಿವೆ. ಹಾಗೆಯೇ ಹಣ್ಣಿನ ಬೆಳೆಗಳಲ್ಲಿ ಕಲ್ಲಂಗಡಿ, ಸೇಬು, ಪಪಾಯ, ದಾಳಿಂಬೆ, ಬಾಳೆ, ಸಪೋಟ, ನಿಂಬೆ, ಮೋಸಂಬಿ, ಸೀಬೆ, ದ್ರಾಕ್ಷಿ, ಬೋರೆ ಹಣ್ಣು ಹಾಗೂ ಸೀತಾಫಲಗಳಿವೆ. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಕಾಫಿ ಮತ್ತು ಗೋಡಂಬಿಗಳಿಗೆ ಪರಕೀಯ ಪರಾಗಸ್ಪರ್ಶ ಅತಿ ಅವಶ್ಯಕ. ಇತರೆ ಬೆಳೆಗಳಾದ ನುಗ್ಗೆ, ಶ್ರೀಗಂಧ, ನೀಲಗಿರಿ, ಜಾಲಿ, ನಂದಿ, ಮತ್ತಿ, ಬೇವು, ಅಂಟುವಾಳ, ಹೊಂಗೆ, ಹೊನ್ನೆ ಚೆಂಡು ಹೂವು, ಸಂಪಿಗೆ ಮತ್ತು ಕುದುರೆ ಮೆಂತೆಗಳು ಪರಕೀಯ ಪರಾಗಸ್ಪರ್ಶವನ್ನು ಅವಲಂಬಿಸಿವೆ. ಸ್ವಂತ ಪರಾಗಸ್ಪರ್ಶ ಹೊಂದುವ ಬೆಳೆಗಳೂ ಸಹ ಪರಕೀಯ ಪರಾಗಸ್ಪರ್ಶ ಹೊಂದಿದಲ್ಲಿ ಅವುಗಳ ರುಚಿ, ಗುಣಮಟ್ಟ ಹಾಗೂ ಇಳುವರಿಗಳು ಹೆಚ್ಚಾಗುವುದು ತಿಳಿದು ಬಂದಿದೆ.
ನಿಸರ್ಗದಲ್ಲಿ ಕೀಟಗಳ ಸಂಖ್ಯೆ ಬೇರೆ ಎಲ್ಲಾ ಜೀವಿಗಳಿಗೆ ಹೋಲಿಸಿದರೆ ಅತೀ ಹೆಚ್ಚಿದೆ. ಅದರೆ ಅದರಲ್ಲಿ ಕೆಲವು ಕೀಟಗಳು ಮಾತ್ರ ಪರಾಗಸ್ಪರ್ಶದಲ್ಲಿ ತೊಡಗುತ್ತವೆ. ಮುಖ್ಯ ಪರಾಗಸ್ಪರ್ಶಿ ಕೀಟಗಳೆಂದರೆ ಜೇನು ನೊಣಗಳು, ಮುಳ್ಳಿಲ್ಲದ ಜೇನು ನೊಣಗಳು, ಏಕಾಂತ ಜೇನು ನೊಣಗಳು, ಕಣಜ, ಕಪ್ಪು ಇರುವೆ, ಮನೆನೊಣದ ಜಾತಿಯ ಸಿರ್ಫಿಡ್ ಬಗೆ, ಬಾಂಬಿಲಸ್ ಬಗೆ, ಜೀರುಂಡೆಗಳು, ಥ್ರಿಪ್ಸ್ ನುಸಿ ಕೀಟಗಳು, ಚಿಟ್ಟೆ ಹಾಗೂ ಪತಂಗಗಳು. ಅತೀ ಮುಖ್ಯ ಪರಾಗಸ್ಪರ್ಶಿ ಕೀಟಗಳಾದ ಜೇನುಹುಳುಗಳು ಬಹಳ ಪರಿಣಾಮಕಾರಿಯಾಗಿ ಹೂಗಳನ್ನು ಬೇಟಿ ನೀಡುತ್ತವೆ. ಉದಾಹರಣೆಗೆ ಒಮ್ಮೆ ಆಹಾರ ಸಂಗ್ರಹಿಸಲು ಹೋದರೆ ಸಾಮಾನ್ಯವಾಗಿ ಒಂದು ನೂರು ಹೂಗಳನ್ನು ಸ್ಪರ್ಶಿಸುತ್ತವೆ. ಅಲ್ಲದೇ ಪ್ರತಿವರ್ಷ ಅಂದಾಜಿನ ಪ್ರಕಾರ ೪ ಮಿಲಿಯನ್ ಹೂಗಳ ಸಂಪರ್ಕ ಸಾಧಿಸುತ್ತವೆ. ಜೇನು ನೊಣಗಳಿಂದಾಗುವ ಪರಾಗಸ್ಪರ್ಶದ ಬೆಲೆಯು
ಅವುಗಳಿಂದ ದೊರಕುವ ಜೇನು ತುಪ್ಪ ಮತ್ತು ಮೇಣಕ್ಕಿಂತ ೧೫-೨೦ ರಷ್ಟು ಹೆಚ್ಚಿದೆ. ಹಾಗೆಯೇ ಬೆಳೆಗಳ ಇಳುವರಿಯಲ್ಲಿ ಸಾಕಷ್ಟು ವೃದ್ಧಿ ಕಂಡುಬAದಿದೆ. ಆದರ್ಶ ಪರಾಗಸ್ಪರ್ಶ ಕೀಟಗಳಿಗೆ ಇರಬೇಕಾದ ಎಲ್ಲ
ಗುಣಗಳಾದ ಗೂಡು ಕಟ್ಟುವುದು, ಆಹಾರ ಸಂಗ್ರಹಣೆ, ಅಧಿಕ ಸಂತಾನೋತ್ಪತ್ತಿ ಜೊತೆಗೆ ಅತೀ ಕಡಿಮೆ ನ್ಯೆಸರ್ಗಿಕ ಶತೃಗಳ ಬಾಧೆ ಮುಂತಾದವುಗಳು ಜೇನು ಹುಳುಗಳಲ್ಲಿವೆ. ಪರಾಗಸ್ಪರ್ಶಿ ಕೀಟಗಳ ಚಟುವಟಿಕೆಯು ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್‌ನಿAದ ಡಿಸೆಂಬರ್-ಜನವರಿವರೆಗೆ ಹೆಚ್ಚಾಗಿರುತ್ತದೆ. ಅಲ್ಲದೇ ಇವುಗಳ ಚಟುವಟಿಕೆಯು ಮೋಡ ಕವಿದ ಅಥವಾ ಮಳೆಗಾಲದ ದಿನಗಳಿಗೆ ಹೋಲಿಸಿದರೆ ಪ್ರಖರ ಬೆಳಕಿನ ದಿನಗಳಲ್ಲಿ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಬೆಳಗಿನ ೮-೧೦ ಗಂಟೆಯವರೆಗೆ ಮತ್ತು ಮಧ್ಯಾಹ್ನ ೪-೬ ಗಂಟೆಯವರೆಗೆ ಪರಾಗ ಸ ್ಪರ್ಶ ಕೀಟಗಳ ಚಟುವಟಿಕೆಯು ಹೆಚ್ಚಾಗಿರುತ್ತದೆ.

Facebook
WhatsApp
Twitter
LinkedIn
About Principal
Willaim Wright

Voluptas feugiat illo occaecat egestas modi tempora facilis, quisquam ultrices.

Recent posts
Government of Karnataka